5.6.17

  
ಪೆರ್ಮುದೆ ಶಾಲೆ ಸ್ಮಾರ್ಟ ಸ್ಕೂಲ್



                                 
ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಒಂದು ತರಗತಿಯನ್ನು ಅತ್ಯಾಧುನಿಕ ತರಗತಿಯನ್ನಾಗಿಸಲು ಪ್ರೋಜೆಕ್ಟರ್ ಒಂದನ್ನು ಶಾಲಾ ಹಳೆವಿದ್ಯಾರ್ಥಿ ಕೊಯಂಗಾನ ಕೃಷ್ಣ ಭಟ್ ರವರು ಉದಾರವಾಗಿ ನೀಡಿದರು. ಕಾರ್ಯಕ್ರಮವನ್ನು ಶ್ರೀ ಕೊಯಂಗಾನ ಕೃಷ್ಣ ಭಟ್  ಪ್ರೋಜೆಕ್ಟರ್ ಆನ್ ಮಾಡುವ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಉತ್ತಮ ಸಾಧನೆಗೈಯಿರಿ ಎಂದು ಹಾರೈಸಿದರು. ಶಾಲಾ ಪ್ರಭಂಧಕರು ಶ್ರೀ ಇ.ರವಿಶಂಕರ ಭಟ್ , ಮುಖ್ಯೋಪಾದ್ಯಾಯಿನಿ ಶ್ರೀಮತಿ ಶಾರದ.ಎ , ಡಾI ಕೇಶವ ಭಟ್ ಎಡಕ್ಕಾನ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ಪಿ.ಟಿ.ಎ ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ದಿವ್ಯಭಾರತಿ, ಪ್ರೀ ಪೈಮರಿ ಅಧ್ಯಕ್ಷ ಶ್ರೀ ಸತೀಶ್ ರೈ ಕುಡಾಲು ಗುತ್ತು , ನಿವೃತ್ತ ಮುಖ್ಯೋಪಾದ್ಯಾಯರು ಶ್ರೀ ಖಾದರ್ ಮಾಸ್ಟರ್, ಪ್ರೋಜೆಕ್ಟರ್ ನಿರ್ವಾಹಕ ಶ್ರೀ ಸುಜೇಶ್, ಎಂಬಿವರು ಉಪಸ್ಥಿತರಿದ್ದರು. ಶಾಲಾ ಅದ್ಯಾಪಕಾದ ಸದಾಶಿವ ಮಾಸ್ಟರ್ ಪೊಯ್ಯೆ ಕಾರ್ಯಕ್ರಮ ನಿರೂಪಿಸಿದರು.ಸ್ಮಿತಾ ಟೀಚರ್ ವಂದಿಸಿದರು.









No comments:

Post a Comment