26.7.18


ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಪಿ.ಟಿ.ಎ ಮಹಾ ಸಭೆ








2018-19 ನೇ ಶೈಕ್ಷಣಿಕ ವರ್ಷದ ಪಿ.ಟಿ.ಎ ಮಹಾ ಸಭೆಯು ಬಿ.ಪಿ.ಪಿ..ಎಲ್.ಪಿ ಪೆರ್ಮುದೆ ಶಾಲೆಯಲ್ಲಿ ಜರಗಿತು..ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ , ಪಿ.ಟಿ. ಅಧ್ಯಕ್ಷ ಶ್ರೀ ಮೊಹಮ್ಮದಾಲಿ, ಎಂ.ಪಿ.ಟಿ. ಅಧ್ಯಕ್ಷೆ ಶ್ರೀಮತಿ ರಮಣಿ, ಪ್ರೀ ಪ್ರೈಮರಿ ಪಿ.ಟಿ. ಅಧ್ಯಕ್ಷ ಜಯರಾಮ ಭಂಡಾರಗುತ್ತು, ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಬ್ದುಲ್ ಖಾದರ್ ಹಾಗೂ ರಕ್ಷಕರು ಉಪಸ್ಥಿತರಿದ್ದರು.ಅಧ್ಯಾಪಕರಾದ ಸದಾಶಿವ ಮಾಸ್ಟರ್ ಪೊಯ್ಯೆ ವರದಿಯನ್ನು ಓದಿದರು. 2018-19 ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಕುರಿತು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಾರದ.ಎ ತಿಳಿಸಿದರು.
            ನೂತನ ಪಿ.ಟಿ. ಅಧ್ಯಕ್ಷರಾಗಿ ಶ್ರೀ ಸತೀಶ್ ರೈ ಕುಡಾಲು ಗುತ್ತು ,ಹಾಗೂ ಉಪಾಧ್ಯಕ್ಷರಾಗಿ ಶ್ರಿ ವಿಟ್ಟಲ.ಕೆ, ಎಂ.ಪಿ.ಟಿ. ಅಧ್ಯಕ್ಷೆಯಾಗಿ ಶ್ರೀಮತಿ ರಮಣಿ, ಪ್ರೀ ಪ್ರೈಮರಿ ಪಿ.ಟಿ. ಅಧ್ಯಕ್ಷರಾಗಿ ಶ್ರೀ ಮೊಹಮ್ಮದಾಲಿ ಆಯ್ಕೆಯಾದರು.ಒಂಬತ್ತು ಮಂದಿ ಒಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಅಧ್ಯಾಪಕರಾದ ಸದಾಶಿವ ಮಾಸ್ಟರ್ ಪೊಯ್ಯೆ ನಿರೂಪಿಸಿದರು.ಜಯಪ್ರಸಾದ್ ವಂದಿಸಿದರು.

No comments:

Post a Comment