ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಶಾಲಾ ಮಟ್ಟದ ಕಲೋತ್ಸವ
ಬಿ.ಪಿ.ಪಿ.ಎ.ಎಲ್.ಪಿ.ಪೆರ್ಮುದೆ ಶಾಲೆಯಲ್ಲಿ ಶಾಲಾ ಮಟ್ಟದ ಕಲೋತ್ಸವವು ಬಹಳ ವಿಜೃಂಭಣೆಯಿಂದ ಜರಗಿತು. ಶಾಲಾ
ಮಟ್ಟದ ಕಲೋತ್ಸವವನ್ನು ಬಾಲ ಪ್ರತಿಭೆ, ಶಾಲಾ ಹಳೆ ವಿದ್ಯಾರ್ಥಿನಿ ಹಾಗೂ ಎಲ್.ಎಸ್.ಎಸ್ ಪರೀಕ್ಷೆ ವಿಜೇತೆ ಕು. ಬ್ಲೆಸ್ಸಿಕ
ಪ್ರೇಯಲ್.ಆರ್ ಅವರು ತಮ್ಮ ಕಲೋತ್ಸವದ ನೆನಪುಗಳನ್ನು ,ಅನುಭವಗಳನ್ನು ತಿಳಿಸುತ್ತಾ ಉದ್ಘಾಟಿಸಿದರು. ಮುಖ್ಯ
ಅತಿಥಿಗಳಾದ ಧರ್ಮತ್ತಡ್ಕ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಶಂಕರನಾರಾಯಣ ಭಟ್ ಕಲೋತ್ಸವದ ಮಹತ್ವದ ಕುರಿತು
ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.2023-24 ಸಾಲಿನ
ಎಲ್.ಎಸ್.ಎಸ್ ಪರೀಕ್ಷೆ ವಿಜೇತೆ ಕು.ಬ್ಲೆಸ್ಸಿಕ ಪ್ರೇಯಲ್ ಇವರಿಗೆ ಅತಿಥಿಗಳು ಶಾಲು ಹೊಂದಿಸಿ ಸ್ಮರಣಿಕೆ ನೀಡಿ
ಗೌರವಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಅಶೋಕ .ಕೆ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುನಿತಾ ,ಶಾಲಾ
ಎಸ್.ಎಸ್.ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರಗಿದವು. ಶಾಲಾ ಅಧ್ಯಾಪಿಕೆ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಕಾರ್ಯಕ್ರಮವನ್ನು
ನಿರೂಪಿಸಿದರು.ಶಾಲಾ ಅಧ್ಯಾಪಕರಾದ ಜಯಪ್ರಸಾದ ಸ್ವಾಗತಿಸಿ ಅಬ್ದುಲ್ ಮುನೀರ್ ವಂದಿಸಿದರು.