5.6.25

ವಿಶ್ವ ಪರಿಸರ ದಿನಾಚರಣೆ

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪರಿಸರ ಸಂಘದ ನೇತೃತ್ವದಲ್ಲಿ ಜರಗಿತು.ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ.ಕೆ.ಕೆ ಪರಿಸರ ದಿನಾಚರಣೆಯ ಮಹತ್ವದ ಕುರಿತು ತಿಳಿಸಿದರು.ವಿದ್ಯಾರ್ಥಿಗಳಿಗೆ ಚಿತ್ರ ರಚನೆ, ಪೋಸ್ಟರ್ ತಯಾರಿ, ಎಂಬಿತ್ಯಾದಿ ಚಟುವಟಿಕೆಗಳನ್ನು ನಡೆಸಲಾಯಿತು. ಅಧ್ಯಾಪಕ ವೃಂದ ವಿದ್ಯಾರ್ಥಿಗಳು ಸೇರಿ ಶಾಲಾ ವಠಾರವನ್ನು ಶುಚಿಗೊಳಿಸಿದರು.ಶಾಲಾ ಪರಿಸರ ಮನೋಹರಗೊಳಿಸುವ ಯೋಜನೆಯ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ತರದ ಗಿಡಗಳನ್ನು ಶಾಲಾ ಜೈವ ಉಧ್ಯಾನ ಮತ್ತು ಶಾಲಾ ಪರಿಸರದಲ್ಲಿ ನೆಟ್ಟರು. ಪರಿಸರ ಸಂಘದ ಸಂಚಾಲಕರಾದ ಜಯಪ್ರಸಾದ್ ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದರು.ಶಾಲಾ ಅಧ್ಯಾಪಕ ವೃಂದ ಸಹಕರಿಸಿದರು.

2.6.25

ಶಾಲಾ ಪ್ರವೇಶೋತ್ಸವ 2025

ಬಿ. ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲಾ ಪ್ರವೇಶೋತ್ಸವವು ವಿವಿಧ ಮನೋರಂಜನ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಮೊದಲಿಗೆ ರಾಜ್ಯಮಟ್ಟದ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮವನ್ನು ಕೇರಳದ ಮುಖ್ಯಮಂತ್ರಿಗಳಾದ ಶ್ರೀ ಪಿಣರಾಯಿ ವಿಜಯನ್ ಅವರು ಉದ್ಘಾಟಿಸುವ ಕಾರ್ಯಕ್ರಮವನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಪ್ರದರ್ಶಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಕೆ. ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಾರ್ಡು ಸದಸ್ಯೆ ಶ್ರೀಮತಿ ಇರ್ಶಾನ ಇಸ್ಮಾಯಿಲ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಿಗೆ ಶುಭ ಹಾರೈಸಿದರು. ಪಿ ಟಿ ಎ ಅಧ್ಯಕ್ಷರಾದ ಶ್ರೀ ಅಶೋಕ.ಕೆ, ಎಂ ಪಿ ಟಿ ಎ ಅಧ್ಯಕ್ಷೆ ಶ್ರೀಮತಿ ಸುನಿತಾ, ಶಾಲಾ ವ್ಯವಸ್ಥಾಪಕರಾದ ಶ್ರೀ ರವಿಶಂಕರ್ ಭಟ್ ಎಡಕ್ಕಾನ ಇವರು ನವಾಗತ ಮಕ್ಕಳಿಗೆ ಕಲಿಕೋಪಕರಣಗಳ ಕಿಟ್ ನೀಡಿ ಆದರದಿಂದ ಸ್ವಾಗತಿಸಿ ಶುಭ ಹಾರೈಸಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ ಸ್ವಾಗತಿಸಿ, ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಡೆಫ್ನಿ ಸ್ಮಿತಾ ಡಯಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.

15.3.25

ಕಲಿಕೋತ್ಸವ 2025

ಬಿ ಪಿ ಪಿ ಎ ಎಲ್ ಪಿ ಪೆರ್ಮುದೆ ಶಾಲೆಯಲ್ಲಿ ಕಲಿಕೋತ್ಸವ


ಎಸ್ ಎಸ್ ಕೆ ಕಾಸರಗೋಡು ಮತ್ತು ಬಿ ಆರ್ ಸಿ ಮಂಜೇಶ್ವರ ಇವರ ಸಹಯೋಗದೊಂದಿಗೆ ಆಯೋಜಿಸಲ್ಪಡುವ ಕಲಿಕೋತ್ಸವ ಕಾರ್ಯಕ್ರಮವು ಬಿ ಪಿ ಪಿ ಎ ಎಲ್ ಪಿ ಶಾಲೆ ಪೆರ್ಮುದೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತುಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ,ಎಸ್ ಎಸ್ ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ,ಶಾಲಾ ಪಿಟಿಎ ಅಧ್ಯಕ್ಷರಾದ ಅಶೋಕ ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಸುನಿತಪ್ರೀ ಪ್ರೈಮರಿ ಪಿಟಿಎ ಅಧ್ಯಕ್ಷೆ ಶ್ರೀಮತಿ ತೇಜಸ್ವಿನಿ ಎಂಬಿವರು ಉಪಸ್ಥಿತರಿದ್ದರುಮುಖ್ಯೋಪಾಧ್ಯಾಯರಾದ ಶ್ರೀ ಸದಾಶಿವ ಕೆ.ಕೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಎಸ್ ಎಸ್ ಜಿ ಸದಸ್ಯರಾದ ಶ್ರೀ ಅಬ್ದುಲ್ ಖಾದರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲಿಕೋತ್ಸವ ಮಕ್ಕಳ ಕಲಿಕೆಯು ಪ್ರಗತಿಯನ್ನು ಬಿಂಬಿಸುವಂತಾಗಲಿ ಎಂದು ಹಾರೈಸಿದರುಅಲ್ಮಾಹಿರ್ ಅರಬಿಕ್ ವಿದ್ಯಾರ್ಥಿ ವೇತನಕ್ಕೆ ಅರ್ಹನಾದ ಮೊಹಮ್ಮದ್ ನಜೀಬ್ ನ್ನು ಶಾಲಾ ಪಿಟಿಎ ಅಧ್ಯಕ್ಷರಾದ ಅಶೋಕ ಪ್ರಮಾಣ ಪತ್ರ ಹಾಗೂ ವಿದ್ಯಾರ್ಥಿ ವೇತನ ನೀಡಿ ಅಭಿನಂದಿಸಿದರು.ಬಳಿಕ ಮಕ್ಕಳಿಂದ ವಿವಿಧ ಕಲಿಕೋತ್ಸವದ ಚಟುವಟಿಕೆಗಳ ಪ್ರದರ್ಶನ ಜರಗಿದವು.

ಶಾಲಾ ಅಧ್ಯಾಪಿಕೆ ಶ್ರೀಮತಿ ಸ್ವಾತಿ ಎಲ್ಲರನ್ನೂ ಸ್ವಾಗತಿಸಿದರುಶಾಲಾ ಅಧ್ಯಾಪಕರಾದ ಜಯಪ್ರಸಾದ್ ಕಾರ್ಯಕ್ರಮವನ್ನು ನಿರೂಪಿಸಿದರುಶಾಲಾ ಅಧ್ಯಾಪಕರಾದ ಅಬ್ದುಲ್ ಮುನೀರ್ ವಂದಿಸಿದರು.